ಕಂದ ಕೃಷ್ಣ

ತೇಲಿದ ಮೋಡಗಳ ನೀಲಿ
ಶಬ್ಧಗಳ ಗುಂಗುಗಳ ಹಿಡಿದು
ಹರಡಿ ಹಾಸಿದ ನೀಲಿ ಕಡಲ ಬಣ್ಣ
ಕಂಪು ಸೂಸಿ ಎಲ್ಲಾ ಹೂಗಳ ತುಂಟ
ಕಣ್ಣುಗಳ ನೋಟದಲಿ ಅರಳಿ ತೇಲಿ
ಕಂದನವನು ಅಲ್ಲಿ ಇಲ್ಲಿ ಸುಳಿದಾಡಿ
ತುಂಬು ಕಂಪನಿಲಿ ಇಂಪಿನಲಿ ಲಾಲಿರಾಗ
ಬೆನ್ನು ಬಿಡದೆ ಬೆಂಬತ್ತಿ ಬಂದಾಗ
ಎದೆಯ ತುಂಬೆಲ್ಲಾ ಅರಬೀ ಸಮುದ್ರ ಉಕ್ಕಿ ಉಕ್ಕಿ
ನಾನೀಗ ಯಶೋಧೆ.
“ವಜ್ರ ವೈಢೂರ್ಯ ಬೇಡ ನನಗೆ
ತುಪ್ಪದ ಅಪ್ಪ ಸೇರದೆ ನಗೆ
ಎತ್ತಿ ದಾರತಿ ತುಂಬಾ ಬೆಳಕು ಕಳವಳದ
ಸಂಜೆ ರಾತ್ರಿಗಳು ನಿಟ್ಟಿಸಿದ ಕಣ್ಣುಗಳ ಸಾವಿರಾರು
ಹೈರಾಣ ಮಾಡಿದೆ ಕುದಿದ ಸೆಖೆ
ಬಯಲ ತಪ್ಪಲಲ್ಲಿ ನನ್ನ ಕೊಳಲಿನ ಕರೆಗೆ
ನರ್ತಿಸಲಿ ನವಿಲು ಅಲ್ಲಿ ಆಡಲಿ, ಕುಚೇಲ
ಚನ್ನಿದಾಂಡು, ಮತ್ತೆ ಗಿಲಿ ಗಿಲಿ ಗೆಜ್ಜೆಯನಾದ
ಗೋಪಿಕೆಯರು ಜೊತೆಗೂಡಲು ಋಷಿಯಲಿ,
ಅಮ್ಮ ಎತ್ತಿಕೊಳ್ಳು ಈಗಲೇ ಈಗಿಂದೀಗಲೇ.”
ಅವನೀಗ ಯಶೋಧೆ ಕಂದ.

ಎಲ್ಲ ರಾಗಗಳು ನದಿಯಾಗಿ ಹರಿದು
ಬಯಲು ತುಂಬ ಹಸಿರು ತಂಬೆಲರು
ಬೆಳ್ಳಗೆ ಬೆಳ್ಳಿಗೆರೆಯಲಿ. ತೇಲಿದ ಬೆಳ್ಳಕ್ಕಿ ಹಿಂಡು
ನೀಲ ಬಾನ ತುಂಬ ತುಂಟರು ಹಾಸಿದ ಬಣ್ಣದ
ಗಾಳಿ ಪಟಗಳು ಅರಳಿದ ಕಣ್ಣುಗಳಲಿ
ಜಗದ ವಿಸ್ಮಯ ಬಯಲು ಸೀಮೆಯ
ಹೊಲಗಳ ಬದುಕಿನ ತುಂಬ ಇವನ
ರಾಗ ಪಲ್ಲಕ್ಕಿ ಹಕ್ಕಿ ಸಾಲು ತೇಲಿ ಜಂಗಮದಲಿ
ಮುರಳಿ ಲೋಲನ ಕಂಪನಗಳ ರಾಗಗಳು
ದೇವಕಿ ನಂದನೀಗ ಯಶೋಧೆ ಕಂದ.

ಫರ್ಮಾನುಗಳ ಹೊರಡಿಸಿವೆ ಅಷ್ಟ ಮಠಗಳು
ಅಷ್ಟದಿಕ್ಕುಗಳಿಗೆ ಎಲ್ಲ ಇಹ ಪರದ ಗೌಜು
ಗದ್ದಲಗಳ ಮಧ್ಯೆ ಬಯಲಲ್ಲಿ ಅವನೀಗ
ಸುಮ್ಮನೆ ಮಣ್ಣಿನಲಿ ಆಡಿ ಮೈಕೈಯಲ್ಲಾ
ಧೂಳು ಕೆಸರು ಬೆತ್ತಲೆ ಬಯಲಲ್ಲಿ
ನಿಲ್ಲಿಸಿ ತಣ್ಣನೆಯ ಗಾಳಿ ಹೊತ್ತ ಪಂಚನದಿಗಳ
ನೀರು ಹೊಯ್ಯುತ್ತಿರುವ ಯಶೋಧೆ.
ಅವನೀಗ ಮರೆತು ಬಿಟ್ಟಿದ್ದಾನೆ. ಉಕ್ಕುವ ಸಮುದ್ರ
ಬಣ್ಣದ ಬೋರಂಗಿ ಹಿಡಿದು ಹಾರಿಸುತ್ತಿದ್ದಾನೆ. ಸುಮ್ಮನೆ. ಝಮ್ಮನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಕಾಶದಲ್ಲೊಂದು ವಾಯುಮಾಪನ ಕಾರ್ಯಾಲಯ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೭೬

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

cheap jordans|wholesale air max|wholesale jordans|wholesale jewelry|wholesale jerseys